

ಭಾನುವಾರದ ಭವಿಷ್ಯ : ನಿಮ್ಮ ಪ್ರತಿಸ್ಪರ್ಧಿಗಳಿಗೆ ನೀವು ಶಾಕ್ ನೀಡುತ್ತೀರಿ
ಇಂದಿನ ರಾಶಿ ಭವಿಷ್ಯ ಹೀಗಿದೆ.. ಮೇಷ : ನೀವು ನಿಮ್ಮ ಕೆಲಸದಲ್ಲಿ ಮತ್ತು ಸಾಮಾಜಿಕ ಬದ್ಧತೆಗಳಲ್ಲಿ ಅತಿಯಾದ ಒತ್ತಡದಲ್ಲಿದ್ದೀರಿ. ನೀವು ಬಿಡುವು ತೆಗೆದುಕೊಂಡು ಸಂತೋಷ ಪಡುವ ಮತ್ತು ನಿಮಗಾಗಿ ಕೊಂಚ ಏನಾದರೂ ಮಾಡುವ ಸಮಯ. ನಿಮ್ಮ ಸೌಖ್ಯಕ್ಕೆ. ವೃಷಭ : ಇಂದು ನಿಮ್ಮ ಗೋಜಲುಗಳಿಂದ ಬಿಡಿಸಿಕೊಂಡು ಹೊರಹೋಗುವ ದಿನ. ನೀವು ಇತರರ ಕೆಲಸಕ್ಕೆ ಆಕ್ಷೇಪಣೆಗೆ ಒಳಗಾಗುತ್ತೀರಿ. ಮಧ್ಯಾಹ್ನದ ವೇಳೆಗೆ ವಿಷಯಗಳು ಆಶಾಭಂಗ ತರಬಹುದು, ಮತ್ತು ನಿಮ್ಮ ವಿಶ್ವಾಸದ ಮಟ್ಟ ಕುಸಿಯಬಹುದು. ನಿಮ್ಮ ಶಕ್ತಿಯ ಮೇಲೆ ಕೆಲಸ ಮಾಡಿ ನಿಮ್ಮ ದೌರ್ಬಲ್ಯವನ್ನು…

ಬಿಗ್ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ಶಾಕ್! ವಾರದ ಅರ್ಧದಲ್ಲೇ ಮೂವರು ಔಟ್! ಹೊರಹೋದ ಆ ಇಬ್ಬರು ಸ್ಪರ್ಧಿಗಳು ಯಾರು?
ಬೆಂಗಳೂರು: ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಮನೆಯಲ್ಲಿ ಈ ವಾರ ದೊಡ್ಡ ಆಘಾತ ಎದುರಾಗಿದೆ! ಮೊದಲ ಫಿನಾಲೆ ವಾರವೆಂದೇ ಬಿಂಬಿಸಲಾಗಿರುವ ಈ ವಾರದಲ್ಲಿ, ಕಿಚ್ಚ ಸುದೀಪ್ ಅವರ ವಾರದ ಪಂಚಾಯಿತಿ ಶುರುವಾದ ಮೊದಲ ದಿನವೇ (ಶನಿವಾರ) ಡಬಲ್ ಎಲಿಮಿನೇಷನ್ ಮೂಲಕ ಇಬ್ಬರು ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಈ ಮೂಲಕ ವಾರದಲ್ಲಿ ಇನ್ನೂ ಒಂದು ದಿನ ಬಾಕಿಯಿರುವಾಗಲೇ ಒಟ್ಟು ಮೂರು ಮಂದಿ ಬಿಗ್ಬಾಸ್ ಮನೆಯಿಂದ ಹೊರಹೋಗುವಂತಾಗಿದೆ. ಕಿಚ್ಚ ಸುದೀಪ್ ಮೊದಲೇ ಸುಳಿವು…

ಶಿಕ್ಷಕರಾಗಲು ಸುವರ್ಣಾವಕಾಶ: ಅಕ್ಟೋಬರ್ 23ರಿಂದ ಟಿಇಟಿ ಪರೀಕ್ಷೆಗೆ ಅರ್ಜಿ ಆಹ್ವಾನ
ಬೆಂಗಳೂರು: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಗೆ ಅರ್ಜಿ ಆಹ್ವಾನಿಸಿದ್ದು, ಇದೇ ಅಕ್ಟೋಬರ್ 23ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಈ ಪರೀಕ್ಷೆಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಹುಡುಕುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಹೊಸ ಆಶಾಕಿರಣ ಮೂಡಲಿದೆ. ಶಿಕ್ಷಣ ಇಲಾಖೆಯ ಈ ನಿರ್ಧಾರವು ರಾಜ್ಯದ ಶೈಕ್ಷಣಿಕ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಅರ್ಜಿ ಸಲ್ಲಿಕೆಯು ಸಂಪೂರ್ಣ ಆನ್ಲೈನ್ ಮೂಲಕ ನಡೆಯಲಿದ್ದು, ಅಕ್ಟೋಬರ್ 23ರಿಂದ ನವೆಂಬರ್ 9ರವರೆಗೆ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಇದಕ್ಕಾಗಿ…

‘ನಮಾಜ್ ಮಾಡಲು ಮುಸ್ಲಿಮರು ಅನುಮತಿ ಪಡೆಯುತ್ತಾರಾ?’ – ಸ್ವಪಕ್ಷದ ಸರ್ಕಾರದ ನಡೆ ಪ್ರಶ್ನಿಸಿದ ಕೆ.ಎನ್. ರಾಜಣ್ಣ
“ಈದ್ಗಾ ಮೈದಾನದಲ್ಲಿ, ರಸ್ತೆಯಲ್ಲೇ ನಮಾಜ್ ಮಾಡುತ್ತಾರೆ. ಅವರು (ಮುಸ್ಲಿಂ) ಪರ್ಮಿಷನ್ ತೆಗೆದುಕೊಳ್ಳುತ್ತಾರಾ? ರಸ್ತೆಯಲ್ಲಿ ನಮಾಜ್ ಮಾಡಲು ಪರ್ಮಿಷನ್ ಕೊಡಿ ಎಂದು ಅವರು ಬರ್ತಾರಾ? ಅಥವಾ ಪರ್ಮಿಷನ್ ತೆಗೆದುಕೊಳ್ಳಿ ಎಂದು ನಾವು ಹೇಳುತ್ತೀವಾ? ಜಾರಿ ಮಾಡಲಾಗದ ಕಾನೂನು ತಂದ್ರೆ ಪುಸ್ತಕದಲ್ಲಿ ಇರಬೇಕು ಅಷ್ಟೇ,” ಎಂದು ರಾಜಣ್ಣ ತಮ್ಮದೇ ಸರ್ಕಾರದ ನಡೆಯನ್ನು ಪ್ರಶ್ನಿಸಿದರು. ಸಂಘಟನೆಗಳ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ: ಸರ್ಕಾರದ ನಿರ್ಧಾರಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕುವಂತೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಮುಖ್ಯಮಂತ್ರಿಗಳಿಗೆ ಪತ್ರ…

ದೆಹಲಿ ಬ್ರಹ್ಮಪುತ್ರ ಅಪಾರ್ಟ್ಮೆಂಟ್ನಲ್ಲಿ ಭಾರಿ ಬೆಂಕಿ – ಸಂಸತ್ ಸದಸ್ಯರ ವಸತಿ ಸಂಕೀರ್ಣದಲ್ಲಿ ಆತಂಕ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ (Delhi)ಯಲ್ಲಿ ಇಂದು ಮಧ್ಯಾಹ್ನ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಸಂಸತ್ ಸದಸ್ಯರಿಗೆ ಹಂಚಿಕೆಯಾದ ಬ್ರಹ್ಮಪುತ್ರ ಅಪಾರ್ಟ್ಮೆಂಟ್ (Brahmaputra Apartment)ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲೂ ಹಾಗೂ ಅಧಿಕಾರಿಗಳಲ್ಲೂ ಆತಂಕ ಉಂಟುಮಾಡಿದೆ. ಬಿಶಂಭರ್ ದಾಸ್ ಮಾರ್ಗದಲ್ಲಿರುವ ಈ ಅಪಾರ್ಟ್ಮೆಂಟ್ ರಾಜ್ಯಸಭಾ ಸಂಸದರ ವಸತಿ ಸಂಕೀರ್ಣವಾಗಿದ್ದು, ಮಧ್ಯಾಹ್ನ ಸುಮಾರು 1:20 ಕ್ಕೆ ಅಗ್ನಿಶಾಮಕ ಇಲಾಖೆ (Fire Department)ಗೆ ಬೆಂಕಿಯ ಕುರಿತು ಮಾಹಿತಿ ಲಭಿಸಿದೆ. ತಕ್ಷಣವೇ ಆರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಸದ್ಯಕ್ಕೆ ಬೆಂಕಿಯನ್ನು ನಿಯಂತ್ರಣಕ್ಕೆ…

ತುಮಕೂರು: ಆತಂಕಕಾರಿ ವರದಿ! 40ರಲ್ಲಿ 19 ನೀರಿನ ಮಾದರಿಗಳು ಕುಡಿಯಲು ಅನರ್ಹ
ತುಮಕೂರು (ಕನ್ನಡ E NEWS): ತುಮಕೂರು ಜಿಲ್ಲೆಯ ಸಾರ್ವಜನಿಕರಲ್ಲಿ ನೀರಿನ ಗುಣಮಟ್ಟದ ಕುರಿತು ಆತಂಕ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾದ ಒಟ್ಟು 40 ನೀರಿನ ಮಾದರಿಗಳಲ್ಲಿ, ಬರೋಬ್ಬರಿ 19 ಮಾದರಿಗಳು ಕುಡಿಯಲು ಯೋಗ್ಯವಲ್ಲ (Unfit for Drinking) ಎಂದು ವರದಿ ದೃಢಪಡಿಸಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ವರದಿಯು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲೊಡ್ಡಿದೆ. ಯಾವ ತಾಲ್ಲೂಕಿನಲ್ಲಿ ಎಷ್ಟು ಮಾದರಿ ಅನರ್ಹ? ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸಂಗ್ರಹಿಸಲಾದ ನೀರಿನ ಮಾದರಿಗಳ ಪರೀಕ್ಷಾ ವರದಿಯಲ್ಲಿ ಈ ಕೆಳಗಿನಂತೆ ಕುಡಿಯಲು ಯೋಗ್ಯವಲ್ಲದ…

ರಿಷಬ್ ಶೆಟ್ಟಿ ಕೌನ್ ಬನೇಗಾ ಕರೋಡ್ಪತಿಯಲ್ಲಿ ಗೆದ್ದ ಹಣ ಎಷ್ಟು ಗೊತ್ತಾ? | ಕನ್ನಡ E News
ರಿಷಬ್ ಶೆಟ್ಟಿ ಅವರು ಕೌನ್ ಬನೇಗಾ ಕರೋಡ್ಪತಿಯಲ್ಲಿ (KBC) ₹12.5 ಲಕ್ಷ ಗೆದ್ದು, ಹಿರೋ ಬೈಕ್ ಹಾಗೂ ಆಹಾರ ಧಾನ್ಯಗಳ ಉಡುಗೊರೆ ಪಡೆದಿದ್ದಾರೆ. ಈ ಮೊತ್ತವನ್ನು ತಮ್ಮ ‘ರಿಷಬ್ ಫೌಂಡೇಶನ್’ ಮುಖಾಂತರ ಸರ್ಕಾರಿ ಶಾಲೆ ಹಾಗೂ ದೈವ ನರ್ತಕರ ಸಹಾಯಕ್ಕೆ ನೀಡಲಿದ್ದಾರೆ.

24 ಗಂಟೆಯಲ್ಲಿ 300 ಮಾವೋವಾದಿಗಳ ಶರಣಾಗತಿ: ನಕ್ಸಲ್ ಮುಕ್ತ ಪ್ರದೇಶಗಳಲ್ಲಿ ಈ ಬಾರಿ ಶಾಂತಿಯ ದೀಪಾವಳಿ – ಪ್ರಧಾನಿ ಮೋದಿ
ಮುಖ್ಯಾಂಶಗಳು: ಒಂದು ಕಾಲದಲ್ಲಿ ಬಾಂಬ್ ಸ್ಫೋಟಿಸಿ ಹತ್ಯೆಗೈಯುತ್ತಿದ್ದ ಸ್ಥಳಗಳಲ್ಲಿ ಈಗ ಕ್ರೀಡಾಕೂಟದ ಸಿದ್ಧತೆ ನಡೆಯುತ್ತಿದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನಕ್ಸಲ್ ಚಟುವಟಿಕೆಗಳ ವಿರುದ್ಧ ತಮ್ಮ ಸರ್ಕಾರದ ಯಶಸ್ವಿ ಕಾರ್ಯಾಚರಣೆಯನ್ನು ಕೊಂಡಾಡಿದರು. ಖಾಸಗಿ ಸುದ್ದಿವಾಹಿನಿಯ ಜಾಗತಿಕ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೇವಲ 24 ಗಂಟೆಗಳಲ್ಲಿ 300 ಮಾವೋವಾದಿಗಳು (Maoists Surrendered) ಸೇರಿದಂತೆ 75 ಗಂಟೆಗಳಲ್ಲಿ ಒಟ್ಟು 303 ನಕ್ಸಲರು ಶರಣಾಗಿದ್ದಾರೆ ಎಂದು ಮಾಹಿತಿ ನೀಡಿದರು. ಇದೇ ಮೊದಲ ಬಾರಿಗೆ ನನ್ನ ನೋವು…

ಹಾಸನಾಂಬೆ ದರ್ಶನಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ: ಜಿಲ್ಲಾಡಳಿತಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮೆಚ್ಚುಗೆ
ಮುಖ್ಯಾಂಶಗಳು: ಶ್ರೀ ಹಾಸನಾಂಬಾ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ಈ ಬಾರಿಯ ವಾರ್ಷಿಕ ದರ್ಶನಕ್ಕಾಗಿ ಜಿಲ್ಲಾ ಆಡಳಿತವು ಮಾಡಿರುವ ಅತ್ಯುತ್ತಮ ಹಾಗೂ ಶಿಸ್ತುಬದ್ಧ ವ್ಯವಸ್ಥೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಳಿಕ ಮಾತನಾಡಿದರು. ಜಿಲ್ಲಾಡಳಿತಕ್ಕೆ ಕೇಂದ್ರ ಸಚಿವರ ಅಭಿನಂದನೆ: ”ದೇವಸ್ಥಾನದ ಆಡಳಿತ ವರ್ಗ ಮತ್ತು ಜಿಲ್ಲಾಡಳಿತವು ಭಕ್ತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅತ್ಯಂತ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡಿದ್ದಾರೆ….